ಫೆಬ್ರವರಿ ೧೬, ೨೦೨೦: ಮತ್ತೆ ಸುಮಾರು ೫೦ ಪ್ರಸಂಗಗಳ ಸ್ಕ್ಯಾನ್‌ ಆಗಿ ನಾಲ್ಕನೇ ಸಾಮೂಹಿಕ ಪ್ರಸಂಗ ಸ್ಕ್ಯಾನ್‌ ಕಮ್ಮಟ ಸಂಪನ್ನ



ಬರೇ ೪ ಜನರ ಸ್ವಯಂಸೇವೆ ಸಿಕ್ಕರೂ ಸುಮಾರು ೫೦ ಪ್ರಸಂಗಗಳ ಸ್ಕ್ಯಾನ್‌ ಒಮ್ಮೆಲೇ ಆಗಿಹೋಗುವ ಮೂಲಕ ನಾಲ್ಕನೇ ಪ್ರಸಂಗ ಸ್ಕ್ಯಾನ್‌ ಕಮ್ಮಟವು ಫಲಕಾರಿಯಾಗಿ ಸಂಪನ್ನವಾಯಿತು.

ನಟರಾಜ ಉಪಾಧ್ಯರ ಮನೆಯಲ್ಲಿ ನಡೆದ ಈ ಕಮ್ಮಟದಲ್ಲಿ ಡಾ. ಆನಂದರಾಮ ಉಪಾಧ್ಯರ ಸಂಗ್ರಹದ ಹೆಚ್ಚಿನ  ಪ್ರಸಂಗ  ಪುಸ್ತಕಗಳ ಸ್ಕ್ಯಾನ್‌ ಆದವು. ಡಾ. ಆನಂದರಾಮ ಉಪಾಧ್ಯ ಹಾಗೂ ರವಿ ಮಡೋಡಿಯವರ ಸಂಗ್ರಹದ ಪ್ರಸಂಗ ಪುಸ್ತಿಕೆಗಳ ಸ್ಕ್ಯಾನ್‌ ಮುಗಿಸಲು ಮುಂದಿನ ಕಮ್ಮಟವೇ ಬೇಕಾಗಬಹುದು.

ಈ ಕಮ್ಮಟದಲ್ಲಿ ಸ್ಕ್ಯಾನ್‌ ಆದ ಪ್ರಸಂಗಗಳು ಇನ್ನೊಂದು ವಾರದಲ್ಲೇ  ಒಪ್ಪಗೊಂಡು ನಮ್ಮ ಸಂಗ್ರಹದಲ್ಲಿ ಸೇರಿ ಒಟ್ಟು ಸಂಗ್ರಹವು ೯೦೦ರ ಗಡಿ ದಾಟುವ ಶುಭ ಸಮಾಚಾರವನ್ನು ನಿರೀಕ್ಷಿಸಿರಿ. 


ಪ್ರಸಂಗಪ್ರತಿಸಂಗ್ರಹ  ಆಂಡ್ರೋಯ್ಡ್ ಆಪ್ ನ ಕೊಂಡಿ : 

ಈ ಕಮ್ಮಟದಲ್ಲಿ ಅಮೂಲ್ಯ, ಅಶ್ವಿನಿ ಹೊದಲ, ವಸಂತಕೃಷ್ಣ ಪಟ್ಟಾಜೆ ಹಾಗೂ ನಟರಾಜ ಉಪಾಧ್ಯರ ಸ್ವಯಂಸೇವೆ ಸೇರಿಹೋಯಿತು. ಅಖಿಲಾ, ಆಶಾ ಹಾಗೂ ಶಾಲಿನಿ ವಾಸುದೇವ ಅವರ ಆತಿಥ್ಯದ ಸಹಕಾರ ಸಿಕ್ಕಿತು. ಮಧ್ಯಾಹ್ನದ ಊಟಕ್ಕೆ ಹೀರೆಕಾಯಿ ಚಟ್ಟಿ, ಪಲಾವ್‌, ಕೂಟು, ಸಾರು ಅಲ್ಲದೇ ಅಶ್ವಿನಿ ಅವರು ತಂದ ಲಾಡು, ಹೋಳಿಗೆ ಹಾಗೂ ಕೋಡುಬಳೆ ಕಳೆಕಟ್ಟಿತು.


ಮಾರ್ಚ್‌ ತಿಂಗಳ ೨೨ರ ಹಾಗೆ  ಬೆಂಗಳೂರಲ್ಲೇ ಇನ್ನೊಂದು ಇದೇ ರೀತಿಯ ಕಮ್ಮಟವಾಗಬೇಕಿದೆ, ಈ ಕುರಿತಾದ ಹೇಳಿಕೆಯನ್ನು ನಿರೀಕ್ಷಿಸಿರಿ.

ಈ ಕಮ್ಮಟದಲ್ಲಿ ಪಾಲುಗೊಂಡು ಬೇರೆ ಬೇರೆ ರೀತಿಯಲ್ಲಿ ಸಹಕರಿಸಿದ ಎಲ್ಲರಿಗೂ ಪ್ರಸಂಗಪ್ರತಿಸಂಗ್ರಹ ಯೋಜನೆ ಹಾಗೂ ಯಕ್ಷವಾಹಿನಿ ಸಂಸ್ಥೆಯ ಪರವಾಗಿ ವಂದಿಸುವ.

ನಟರಾಜ ಉಪಾಧ್ಯ
Share:

1 comment:

ಹೆಚ್ಚು ವೀಕ್ಷಣೆಯಾದವು

Powered by Blogger.

ಹೊಸತು..

ನೀವೂ ಪಾಲ್ಗೊಳ್ಳಿ

  • ನಮ್ಮ ಯೋಜನೆಗಳಲ್ಲಿ ಸ್ವಯಂಸೇವಕರಾಗಿ ಪಾಲ್ಗೊಳ್ಳಿ
  • ನಿಮ್ಮ ಅಮೂಲ್ಯ ಸಂಗ್ರಹಗಳನ್ನು ಡಿಜಿಟಲೀಕರಣಗೊಳಿಸುವುದಕ್ಕಾಗಿ ನಮ್ಮನ್ನು ಸಂಪರ್ಕಿಸಿ
  • ತಾಂತ್ರಿಕ ಪರಿಣತಿ, ಕಂಪ್ಯೂಟರ್ ಬೆರಳಚ್ಚು ಪರಿಣತಿ, ಪ್ರತಿ ಪರಿಶೀಲನೆ ಇತ್ಯಾದಿ ಕುಶಲತೆಯಿದ್ದ ಯಕ್ಷಗಾನಾಸಕ್ತರು ನಮ್ಮ ಯೋಜನೆಗಳಲ್ಲಿ ಕೈಜೋಡಿಸಬಹುದು
  • ಸಂಪರ್ಕ ಆಯ್ಕೆಯ ಮೂಲಕ ನಮಗೊಂದು ಸಂದೇಶ ಕಳುಹಿಸಿ